Please enable javascript.Akaay Baby Name Meaning: ವಿರುಷ್ಕಾ ದಂಪತಿ ಮಗುವಿಗೆ 'ಅಕಾಯ್' ಅಂತ ಹೆಸರಿಟ್ಟಿದ್ದೇಕೆ? ಜ್ಯೋತಿಷ್ಯದ ಪ್ರಕಾರ 'ಅಕಾಯ್' ಎಂದರೇನು? - virat & anushka's son akaay kohli name meaning & zodiac sign

Akaay: ವಿರುಷ್ಕಾ ದಂಪತಿ ಮಗುವಿಗೆ 'ಅಕಾಯ್' ಅಂತ ಹೆಸರಿಟ್ಟಿದ್ದೇಕೆ? ಜ್ಯೋತಿಷ್ಯದ ಪ್ರಕಾರ 'ಅಕಾಯ್' ಎಂದರೇನು?

Authored by ಆಶಾ ಸಂಪದ | Agencies | 21 Feb 2024, 12:18 pm
Subscribe

Virat kohli-Anushka sharma: ತಾರಾ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಎರಡನೇ ಮಗು ಜನಿಸಿದೆ. ತಮಗೆ ಗಂಡು ಮಗು ಜನಿಸಿದೆ ಎಂದು ದಂಪತಿ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಗಂಡು ಮಗುವಿಗೆ ಅಕಾಯ್ ಎಂದು ನಾಮಕರಣ ಮಾಡಿರುವುದಾಗಿ ಹೇಳಿದ್ದಾರೆ. ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಕಾಯ್​ ಎಂಬ ಹೆಸರಿನ ಅರ್ಥವೇನು ಎಂಬುದು ಇಲ್ಲಿದೆ ನೋಡಿ.

akaay meaning
ಭಾರತ ತಂಡದ ಮಾಜಿ ನಾಯಕ ಮತ್ತು ಕ್ರಿಕೆಟ್‌ನ ರಾಜ ಎಂದು ಕರೆಯಲ್ಪಡುವ ವಿರಾಟ್ ಕೊಹ್ಲಿ ಅವರಿಗೆ ಗಂಡು ಮಗು ಜನಿಸಿದೆ. ಫೆಬ್ರವರಿ 15 ರಂದು ಗಂಡು ಮಗು ಜನಿಸಿದೆ ಎಂದು ಕೊಹ್ಲಿ ಮತ್ತು ಅನುಷ್ಕಾ ತಿಳಿಸಿದ್ದಾರೆ. ವಿರಾಟ್ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಅವರ ಪತ್ನಿ ಹಾಗೂ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ತಾರಾ ಜೋಡಿ ಮಗನಿಗೆ 'ಅಕಾಯ್' ಎಂದು ಹೆಸರಿಟ್ಟಿದ್ದಾರೆ. ಈ ಸ್ಟಾರ್ ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದ್ದು, ಆ ಮಗುವಿಗೆ ವಾಮಿಕಾ ಎಂದು ಹೆಸರಿಟ್ಟಿದ್ದಾರೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕಾಯ್‌ ಎಂಬ ಹೆಸರಿನ ಅರ್ಥವೇನು ಎಂಬುದನ್ನು ತಿಳಿಯೋಣ.


ಅಕಾಯ್ ಹೆಸರಿನ ಅರ್ಥವೇನು?
Name Astrology: ಅಕಾಯ್ ಹೆಸರಿನ ಬಗ್ಗೆ ಅನೇಕರಿಗೆ ಕುತೂಹಲ ಮೂಡಿದೆ. ಅಷ್ಟಕ್ಕೂ ಅಕಾಯ್ ಎಂದರೇನು? ಅಕಾಯ್ ಎಂಬ ಪದ ಟರ್ಕಿ ಮೂಲದಿಂದ ಬಂದಿರುವ ಹಿಂದಿ ಪದ. ಸಂಸ್ಕೃತದಲ್ಲಿ ಅಕಾಯ್ ಎಂದರೆ ದೇಹವಿಲ್ಲದ, ನಿರಾಕಾರ ಎಂಬ ಅರ್ಥ ಬರುತ್ತದೆ. ಹಿಂದೂ ಧರ್ಮದಲ್ಲಿ ಶಿವನನ್ನು ನಿರಾಕಾರ ಎಂದು ಪರಿಗಣಿಸಲಾಗಿದೆ. ಅಕಾ ಎಂದರೆ ದೇಹ. ಶಿವ ಸಹಸ್ರನಾಮ ಲಿಂಗ ಪುರಾಣದ ಪ್ರಕಾರ, ಅಕಾಯ್ ಎಂದರೆ ಶಿವನ ಹೆಸರಾಗಿದೆ. ಅಲ್ಲದೇ ಟರ್ಕಿಶ್ ಮೂಲದಲ್ಲಿ, ಅಕಾಯ್ ಪದವು ಹೊಳೆಯುತ್ತಿರುವ ಚಂದ್ರ ಎಂದರ್ಥ.


ಜ್ಯೋತಿಷ್ಯದಲ್ಲಿ A ಅಕ್ಷರದ ಅರ್ಥ (Akaay)
A
A ಎಂಬುದು ವರ್ಣಮಾಲೆಗಳ ಸರಣಿಯಲ್ಲಿ ಮೊದಲ ಅಕ್ಷರವಾಗಿದೆ. ಇದು ಸಂಖ್ಯೆ 1 ರ ಸ್ಥಿತಿಯನ್ನು ನೀಡುತ್ತದೆ. ವಾಸ್ತವವಾಗಿ, A ಅನ್ನು ಸಂಕೇತಿಸುವ ಸಂಖ್ಯೆಯು 1 ಆಗಿದೆ. ಸಂಖ್ಯಾಶಾಸ್ತ್ರದ ಪ್ರಕಾರ, ಸಂಖ್ಯೆ 1 ಸೂರ್ಯನಿಂದ ಆಳಲ್ಪಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 'ಎ' ಕೃತಿಕಾ ನಕ್ಷತ್ರದಲ್ಲಿ ಬರುತ್ತದೆ, ಅದರ ಆಡಳಿತಾಧಿಪತಿ ಸೂರ್ಯನು ಮತ್ತು ರಾಶಿಚಕ್ರ ಚಿಹ್ನೆಯು ಮಂಗಳನಿಂದ ಆಳಲ್ಪಡುವ ಮೇಷ ರಾಶಿಯಾಗುತ್ತದೆ.
ಆದ್ದರಿಂದ A ಅಕ್ಷರವು ಸೂರ್ಯನ ಶಕ್ತಿಯೊಂದಿಗೆ ಪ್ರಾಥಮಿಕವಾಗಿ ಮಂಗಳದ ಪ್ರಭಾವವನ್ನು ಹೊಂದುವುದರೊಂದಿಗೆ ಕಂಪಿಸುತ್ತದೆ. ಸೂರ್ಯ ಮತ್ತು ಮಂಗಳ ಎರಡೂ ಬಲವಾದ ಮನೋಧರ್ಮದೊಂದಿಗೆ ಉರಿಯುತ್ತಿರುವ ಗ್ರಹಗಳಾಗಿವೆ. ಯಾರ ಹೆಸರು A ಅಕ್ಷರದಿಂದ ಪ್ರಾರಂಭವಾಗುತ್ತದೆಯೋ ಅವರ ಜೀವನದಲ್ಲಿ ಸೂರ್ಯ ಮತ್ತು ಮಂಗಳನ ಪ್ರಭಾವ ಇರುತ್ತದೆ. ಸೂರ್ಯನು ನಾಯಕತ್ವ, ಮಹತ್ವಾಕಾಂಕ್ಷೆ, ಶಕ್ತಿ, ಅಧಿಕಾರ ಮತ್ತು ರಾಜ-ರೀತಿಯ ಸ್ಥಾನಮಾನವನ್ನು ಪ್ರತಿನಿಧಿಸುತ್ತಾನೆ. ಮಂಗಳವು ಯೋಧರ ಶಕ್ತಿಯನ್ನು ಪ್ರತಿನಿಧಿಸುತ್ತದೆ.
March Grah Gochar 2024: ಮಾರ್ಚ್‌ನಲ್ಲಿ 4 ಗ್ರಹಗಳ ಸಂಚಾರ: ಈ 5 ರಾಶಿಗೆ ಮಾರ್ಚ್ ತಿಂಗಳು ತುಂಬಾ ಲಕ್ಕಿ!

ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಮಗನ ರಾಶಿಚಕ್ರ ಚಿಹ್ನೆ
ಅಕಾಯ್‌ ಜನ್ಮ ದಿನಾಂಕವನ್ನು ಫೆಬ್ರವರಿ 15 ಪರಿಗಣಿಸಿದರೆ, ಕೊಹ್ಲಿ, ಅನುಷ್ಕಾ ಮತ್ತು ವಿರಾಟ್ ಅವರ ಗಂಡು ಮಗು ಅಕಾಯ್‌ನ ರಾಶಿ ರಾಶಿ ಸೂರ್ಯ ಚಿಹ್ನೆ ಕುಂಭ ರಾಶಿಯನ್ನು ಹೊಂದಿರುತ್ತದೆ. ಜ್ಯೋತಿಷ್ಯದಲ್ಲಿ, ಕುಂಭ ರಾಶಿ ರಾಶಿಚಕ್ರದ ಹನ್ನೊಂದನೇ ಚಿಹ್ನೆಯಾಗಿದ್ದು, ಜನವರಿ 20 ರಿಂದ ಫೆಬ್ರವರಿ 18 ರ ಅವಧಿಯನ್ನು ಆಳುತ್ತದೆ ಎಂದು ಪರಿಗಣಿಸಲಾಗಿದೆ.


ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಮಗನ ಹುಟ್ಟಿದ ದಿನಾಂಕ 15
15
Numerology: ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳಿನ 6, 15 ಹಾಗೂ 24ನೇ ತಾರೀಕಿನಂದು ಜನಿಸಿದವರ ಜನ್ಮಸಂಖ್ಯೆ 6 ಆಗುತ್ತದೆ. ಜನ್ಮಸಂಖ್ಯೆ 6ರ ಅಧಿಪತಿ ಶುಕ್ರ. ಸೂರ್ಯನಿಂದ ಎರಡನೇ ಸ್ಥಾನದಲ್ಲಿರುವ ಹಾಗೂ ಆರನೇ ಅತೀ ದೊಡ್ಡ ಗ್ರಹ ಶುಕ್ರ. ಸೂರ್ಯ ಚಂದ್ರರ ನಂತರ ಆಕಾಶದಲ್ಲಿ ಬಹಳ ಪ್ರಕಾಶಮಾನವಾದ ಗ್ರಹವೆಂದರೆ ಇದೇ ಶುಕ್ರ ಗ್ರಹ. ಈ ಗ್ರಹವನ್ನು 'ಸೌಂದರ್ಯದ ದೇವತೆ'ಯೆಂದೂ ಕರೆಯಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದು ವೃಷಭ ಹಾಗೂ ತುಲಾ ರಾಶಿಯ ಅಧಿಪತಿ. ಈ ಗ್ರಹವನ್ನು ಗೌರವ, ಸಮ್ಮಾನ, ಸಂತೋಷ ಮತ್ತು ವೈಭವ, ವೈವಾಹಿಕ ಸಂತೋಷ ಹಾಗೂ ಐಷಾರಾಮದ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಈ ಗ್ರಹವು ನಮ್ಮ ಎಲ್ಲಾ ಸಂಪತ್ತು ಸಂಬಂಧಿತ, ವಸ್ತು ಸಂತೋಷಗಳು ಮತ್ತು ಮದುವೆಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಅಂಶವಾಗಿದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕಾಯ್ ಹುಟ್ಟಿದ ದಿನಾಂಕ 15 ಆಗಿರುವುದರಿಂದ ತಾರಾ ದಂಪತಿಗೆ ಈ ಗಂಡು ಮಗುವಿನ ಜನನ ತುಂಬಾ ಅದೃಷ್ಟ ಎಂದು ಹೇಳಬಹುದು.


ವಾಮಿಕಾ ಹೆಸರಿನ ಅರ್ಥವೇನು?
ವಿರುಷ್ಕಾ ತನ್ನ ಮಗಳಿಗೆ ವಾಮಿಕಾ ಎಂದು ಹೆಸರಿಟ್ಟಿರುವುದು ಗಮನಾರ್ಹ. ವಾಮಿಕಾ ಜನವರಿ 11, 2021 ರಂದು ಜನಿಸಿದ್ದಾರೆ. ವಾಮಿಕಾ ಎಂಬುದು ದುರ್ಗಾ ದೇವಿಯ ಹೆಸರು. ಈ ಹೆಸರನ್ನು ಭಗವಾನ್ ಶಿವ ಮತ್ತು ಪಾರ್ವತಿಯ ಮಿಶ್ರ ರೂಪವೆಂದು ಸಹ ಪರಿಗಣಿಸಲಾಗುತ್ತದೆ.
 ಆಶಾ ಸಂಪದ
ಆಶಾ ಸಂಪದ ಅವರ ಬಗ್ಗೆ
ಆಶಾ ಸಂಪದ
ಆಶಾ ಸಂಪದ ಅವರು ಅನುಭವಿ ಪತ್ರಕರ್ತರಾಗಿದ್ದು, ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ 2022ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2014ರಲ್ಲಿ ನ್ಯೂಸ್ ಚಾನೆಲ್ ಮೂಲಕ ವೃತ್ತಿಜೀವನ ಪ್ರಾರಂಭಿಸಿದ ಇವರು ಮಾಧ್ಯಮ ರಂಗದಲ್ಲಿ 9 ವರ್ಷ ಅನುಭವ ಹೊಂದಿದ್ದಾರೆ. ಪ್ರಸ್ತುತ ಜ್ಯೋತಿಷ್ಯ ವಿಭಾಗದ ಸಂಪಾದಕರಾಗಿ 1 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, ಅದಕ್ಕೂ ಹಿಂದಿನಿಂದ ವಾರಪತ್ರಿಕೆಗಳಿಗೆ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳ ಬರವಣಿಗೆಯಿಂದ ಗುರುತಿಸಿಕೊಂಡಿರುತ್ತಾರೆ. ಕೆಲಸದ ಹೊರತಾಗಿ, ಓದು, ಪ್ರವಾಸ, ಫೋಟೋಗ್ರಫಿ, ಯೋಗ ಇವರ ಇಷ್ಟದ ಅಭ್ಯಾಸ-ಹವ್ಯಾಸಗಳು. ಎಸ್.ಎಲ್ ಭೈರಪ್ಪ ಇವರ ನೆಚ್ಚಿನ ಲೇಖಕರು.... Read More
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ